8th 1ನೇ ಅಧ್ಯಾಯ

 1.. ಭತ್ತವನ್ನು ಚಳಿಗಾಲದಲ್ಲಿ ಬೆಳೆಯದಿರಲು ಕಾರಣವೇನು?


ಭತ್ತದ ಬೆಳೆಗೆ ಅತ್ಯಧಿಕ ಪ್ರಮಾಣದ ನೀರು ಬೇಕು ಆದ್ದರಿಂದ ಇದನ್ನು ಮಳೆಗಾಲದಲ್ಲಿ ಮಾತ್ರ ಬೆಳೆಯಲಾಗುತ್ತದೆ.


2. ಜಮೀನಿನಲ್ಲಿ ಕಂಡುಬರುವ ಸಲಕರಣೆಗಳು ಯಾವುವು?

ಜಮೀನಿನಲ್ಲಿ ಕಂಡುಬರುವ ಸಲಕರಣೆಗಳು ಕುರ್ಪಿ, ಕುಡುಗೋಲು ಸಲಿಕೆ, ನೇಗಿಲು ಇತ್ಯಾದಿ.


3. ಬೆಳೆ ಎಂದರೇನು?

ಒಂದು ಸ್ಥಳದಲ್ಲಿ ಒಂದೇ ರೀತಿಯ ಸಸ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆದು ಕೃಷಿ ಮಾಡುವುದಕ್ಕೆ ಬೆಳೆ ಎಂದು ಕರೆಯುತ್ತಾರೆ.


4. ಎಲ್ಲಾ ಜೀವಿಗಳಿಗೆ ಆಹಾರದ ಅಗತ್ಯ ಇದೆಯೇ?

ಹೌದು, ಎಲ್ಲಾ ಜೀವಿಗಳಿಗೆ ಆಹಾರದ ಅಗತ್ಯವಿದೆ.


5. ಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ ಅಧ್ಯಾಯದಲ್ಲಿ ಬರುವ ಪ್ರಮುಖ ಪದಗಳನ್ನು ಹೆಸರಿಸಿ.

ಕೃಷಿ ಪದ್ಧತಿಗಳು,

ಪಶುಸಂಗೋಪನೆ

ಬೆಳೆ 

ರಸಗೊಬ್ಬರಗಳು

ಗೋದಾಮುಗಳು 

ಕೊಯ್ಲು 

ನೀರಾವರಿ 

ಖಾರಿಫ್ 

ಸಾವಯವ ಗೊಬ್ಬರ 

ನೇಗಿಲು 

ರಬಿ

ಬೀಜಗಳು

ಸಂಗ್ರಹಾಗಾರ

ಬಿತ್ತನೆ 

ಸಂಗ್ರಹಣೆ 

ಒಕ್ಕಣೆ 

ಕಳೆಗಳು 

ಕಳೆನಾಶಕ 

ತೂರುವಿಕೆ.


6. ಕೃಷಿ ಪದ್ಧತಿಗಳು ಎಂದರೇನು?

 

ಬೆಳೆಗಳ ಕೃಷಿಯು ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ರೈತರು ಕೈಗೊಳ್ಳುವ ಅನೇಕ ಚಟುವಟಿಕೆಗಳನ್ನು ಒಳಗೊಂಡಿದೆ, ಈ ಚಟುವಟಿಕೆಗಳು ಅಥವಾ ಕಾರ್ಯಗಳನ್ನು ಕೃಷಿ ಪದ್ಧತಿಗಳು ಎನ್ನುವರು.


7. ಕೃಷಿ ಪದ್ಧತಿಗಳನ್ನು ಪಟ್ಟಿ ಮಾಡಿ.


ಮಣ್ಣನ್ನು ಹದಗೊಳಿಸುವಿಕೆ 

ಬಿತ್ತನೆ 

ಸಾವಯವ ಗೊಬ್ಬರಗಳು ಮತ್ತು ರಸಗೊಬ್ಬರಗಳನ್ನು ಸೇರಿಸುವುದು ನೀರಾವರಿ 

ಕಳೆಗಳಿಂದ ರಕ್ಷಣೆ

ಕೊಯ್ಲು 

ಸಂಗ್ರಹಣೆ


8. ಕೃಷಿಯಲ್ಲಿನ ಮೊದಲ ಹಂತ ಯಾವುದು?

ಮಣ್ಣನ್ನು ಹದಗೊಳಿಸುವುದು


9. ಕೃಷಿಯಲ್ಲಿನ ಬಹು ಮುಖ್ಯ ಕಾರ್ಯ ಯಾವುದು?


ಮಣ್ಣನ್ನು ತಿರುವಿ ಹಾಕುವುದು ಮತ್ತು ಅದನ್ನು ಸಡಿಲಗೊಳಿಸುವುದು.


10. ಮಣ್ಣನ್ನು ತಿರುವಿ ಹಾಕುವುದು ಮತ್ತು ಸಡಿಲಗೊಳಿಸುವುದರ ಪ್ರಾಮುಖ್ಯತೆಯನ್ನು ತಿಳಿಸಿ.


ಮಣ್ಣನ್ನು ತಿರುವಿ ಹಾಕುವುದು ಮತ್ತು ಸಡಿಲಗೊಳಿಸುವುದರಿಂದ ಬೇರುಗಳು ಮಣ್ಣಿನ ಆಳಕ್ಕೆ ಇಳಿಯಲು ಸಾಧ್ಯವಾಗುತ್ತದೆ. ಬೇರುಗಳು ಅತ್ಯಂತ ಆಳಕ್ಕೆ ಹೋದರೂ ಸಡಿಲವಾದ ಮಣ್ಣು ಅವುಗಳ ಸುಲಭ ಉಸಿರಾಟಕ್ಕೆ ಅನುವುಮಾಡಿಕೊಡುತ್ತದೆ.


11. ಸಡಿಲವಾದ ಮಣ್ಣಿನಿಂದ ರೈತನಿಗೆ ಏನು ಪ್ರಯೋಜನ?


ಸಡಿಲವಾದ ಮಣ್ಣು ಎರೆಹುಳುಗಳ ಮತ್ತು ಸೂಕ್ಷ್ಮ ಜೀವಿಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ಜೀವಿಗಳು ರೈತನ ಮಿತ್ರ.


12. ಸಡಿಲವಾದ ಮಣ್ಣಿನಲ್ಲಿ ಎರೆಹುಳುಗಳು ಮತ್ತು ಸೂಕ್ಷ್ಮಜೀವಿಗಳ ಪಾತ್ರವನ್ನು ತಿಳಿಸಿ.


ಸಡಿಲವಾದ ಮಣ್ಣಿನಲ್ಲಿ ವಾಸಿಸುವ ಎರೆಹುಳುಗಳು ಮತ್ತು ಸೂಕ್ಷ್ಮಾಣು ಜೀವಿಗಳು ಮಣ್ಣನ್ನು ತಿರುವಿಹಾಕಿ ಸಡಿಲಗೊಳಿಸುತ್ತವೆ ಹಾಗೂ ಅದಕ್ಕೆ ಹ್ಯೂಮಸ್ಸನ್ನು ಸೇರಿಸಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ.


13. ಮಣ್ಣಿಗೆ ಪೋಷಕಾಂಶಗಳು ಹೇಗೆ ಮರಳಿ ಸೇರಿಸಲ್ಪಡುತ್ತದೆ?


ಮಣ್ಣು, ಖನಿಜಗಳು, ನೀರು, ಗಾಳಿ ಮತ್ತು ಕೆಲವು ಜೀವಿಗಳನ್ನು ಒಳಗೊಂಡಿದೆ. ಸತ್ತ ಸಸ್ಯಗಳು ಮತ್ತು ಪ್ರಾಣಿಗಳು ಮಣ್ಣಿನಲ್ಲಿರುವ ವಿಘಟಕ ಸೂಕ್ಷ್ಮಜೀವಿಗಳಾದ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಿಂದ ವಿಘಟನೆಗಳ್ಳುತ್ತವೆ. ಹೀಗೆ ಪೋಷಕಾಂಶಗಳು ಮರಳಿ ಮಣ್ಣಿಗೆ ಸೇರಿಸಲ್ಪಡುತ್ತವೆ. ಈ ಪೋಷಕಾಂಶಗಳು ಪುನಹ ಸಸ್ಯಗಳಿಂದ ಹೀರಲ್ಪಡುತ್ತವೆ.


14. ಉಳುಮೆ ಮಾಡುವುದು ಎಂದರೇನು?


ಮಣ್ಣನ್ನು ತಿರುವಿಹಾಕಿ ಸಡಿಲಗೊಳಿಸುವ ಪ್ರಕ್ರಿಯೆಯನ್ನು ಉಳುಮೆ ಮಾಡುವುದು ಎನ್ನುತ್ತಾರೆ.


15. ಉಳುಮೆ ಮಾಡಲು ಬಳಸುವ ಉಪಕರಣ ಯಾವುದು?


ನೇಗಿಲು


16. ಉಳುಮೆ ಮಾಡುವ ಮೊದಲು ಮಣ್ಣು ಬಹಳಷ್ಟು ಒಣಗಿದ್ದರೆ ಏನು ಮಾಡುತ್ತಾರೆ?


ಉಳುಮೆ ಮಾಡುವ ಮೊದಲು ಮಣ್ಣು ಬಹಳಷ್ಟು ಒಣಗಿದ್ದರೆ ನೀರನ್ನು ಹಾಯಿಸುತ್ತಾರೆ.


17. ಹೆಂಟೆಗಳು ಎಂದರೇನು?


ಉಳುಮೆ ಮಾಡಿದ ಜಮೀನು ಮಣ್ಣಿನ ದೊಡ್ಡ ಚೂರುಗಳನ್ನು ಹೊಂದಿರಬಹುದು ಇವುಗಳನ್ನು ಹೆಂಟೆಗಳೆನ್ನುವರು.


18. ಜಮೀನನ್ನು ಏಕೆ ಮಟ್ಟ ಮಾಡಬೇಕು?


ಜಮೀನನ್ನು ಬಿತ್ತನೆ ಮಾಡಲು ಮತ್ತು ನೀರಾವರಿ ಉದ್ದೇಶಗಳಿಗಾಗಿ ಮಟ್ಟಮಾಡಬೇಕು.


19. ಜಮೀನನ್ನು ಮಟ್ಟ ಮಾಡಲು ಬಳಸುವ ಉಪಕರಣ ಯಾವುದು?

ಲೆವೆಲ್ಲರ್(leveller)


20. ಉಳುಮೆಗೆ ಮೊದಲು ಮಣ್ಣಿಗೆ ಏನನ್ನು ಹಾಕಲಾಗುತ್ತದೆ?


ಉಳುಮೆಗೆ ಮೊದಲು ಮಣ್ಣಿಗೆ ಗೊಬ್ಬರವನ್ನು ಹಾಕಲಾಗುತ್ತದೆ. ಗೊಬ್ಬರವು ಮಣ್ಣಿನೊಂದಿಗೆ ಸರಿಯಾಗಿ ಮಿಶ್ರಣವಾಗಲು ಉಳುಮೆ ಸಹಾಯಮಾಡುತ್ತದೆ. ಬಿತ್ತನೆಗೆ ಮೊದಲು ಮಣ್ಣನ್ನು ತೇವಪೂರಿತಗೊಳಿಸಲಾಗುತ್ತದೆ.




1.ಹಸಿರು ಸಸ್ಯಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆಯೇ?

ಹೌದು, ಹಸಿರು ಸಸ್ಯಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ.


2. ಹಸಿರು ಸಸ್ಯಗಳು ತಮ್ಮ ಆಹಾರವನ್ನು ತಾವೇ ಹೇಗೆ ತಯಾರಿಸಿಕೊಳ್ಳುತ್ತವೆ?

ಹಸಿರು ಸಸ್ಯಗಳು ತಮ್ಮ ಆಹಾರವನ್ನು ತಾವೇ ದ್ಯುತಿಸಂಶ್ಲೇಷಣೆ ಎಂಬ ಪ್ರಕ್ರಿಯೆಯ ಮೂಲಕ ತಯಾರಿಸಿಕೊಳ್ಳುತ್ತವೆ.


3. ನಾವು ಆಹಾರವನ್ನು ಏಕೆ ಸೇವಿಸಬೇಕು?

ನಾವು ಆಹಾರವನ್ನು ಶಕ್ತಿಗಾಗಿ ಸೇವಿಸಬೇಕು.


4. ನಮ್ಮ ದೇಹದಲ್ಲಿ ವಿವಿಧ ಜೀವ ಕ್ರಿಯೆಗಳನ್ನು ಹೆಸರಿಸಿ.

ಜೀರ್ಣಕ್ರಿಯೆ, ಶ್ವಾಸಕ್ರಿಯೆ, ವಿಸರ್ಜನಾ ಕ್ರಿಯೆ, ಇತ್ಯಾದಿ.


5. ಆಹಾರ ಸೇವನೆಯಿಂದ ದೊರೆಯುವ ಶಕ್ತಿಯನ್ನು ಜೀವಿಗಳು ಯಾವುದಕ್ಕಾಗಿ ಬಳಸಿಕೊಳ್ಳುತ್ತವೆ?

ಆಹಾರ ಸೇವನೆಯಿಂದ ದೊರೆಯುವ ಶಕ್ತಿಯನ್ನು ಜೀವಿಗಳು ಜೀವ ಕ್ರಿಯೆಗಳನ್ನು ನಡೆಸಲು ಬಳಸಿಕೊಳ್ಳುತ್ತವೆ.


6. ನಮ್ಮ ಆಹಾರದ ಆಕರಗಳು ಯಾವುವು?

ನಮ್ಮ ಆಹಾರದ ಆಕರಗಳು ಸಸ್ಯಗಳು ಪ್ರಾಣಿಗಳು ಅಥವಾ ಸಸ್ಯಗಳು ಮತ್ತು ಪ್ರಾಣಿಗಳು.


7. ಪ್ರಸ್ತುತ ನಮ್ಮ ದೇಶದ ಜನಸಂಖ್ಯೆ ಎಷ್ಟು?


1,380,004,385


8. ಅತ್ಯಧಿಕ ಸಂಖ್ಯೆಯಲ್ಲಿರುವ ನಮ್ಮ ದೇಶದ ಜನರಿಗೆ ನಾವು ಆಹಾರವನ್ನು ಒದಗಿಸುವುದು ಹೇಗೆ?


ಆಹಾರವನ್ನು ಅತ್ಯಧಿಕ ಪ್ರಮಾಣದಲ್ಲಿ ಉತ್ಪಾದಿಸಬೇಕಾಗುತ್ತದೆ.


9 ಹೆಚ್ಚಿನ ಜನ ಸಮೂಹಕ್ಕೆ ಆಹಾರವನ್ನು ಒದಗಿಸಬೇಕಾದರೆ ನಾವು ಏನೇನು ಮಾಡಬೇಕು?

 

ಆಹಾರದ ನಿಯಮಿತ ಉತ್ಪಾದನೆ, ಸಮರ್ಪಕ ನಿರ್ವಹಣೆ, ಮತ್ತು

ವಿತರಣೆ


10. ಬೆಳೆ ಎಂದರೇನು?

ಒಂದು ಸ್ಥಳದಲ್ಲಿ ಒಂದೇ ರೀತಿಯ ಸಸ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆದು ಕೃಷಿ ಮಾಡುವುದಕ್ಕೆ ಬೆಳೆ ಎಂದು ಕರೆಯುತ್ತಾರೆ.


11. ಗೋಧಿಯ ಬೆಳೆ ಎಂದರೇನು?


ಗೋಧಿಯ ಬೆಳೆ ಎಂದರೆ ಒಂದು ಜಮೀನಿನಲ್ಲಿ ಬೆಳೆಯುವ ಎಲ್ಲಾ ಸಸ್ಯಗಳು ಗೋಧಿಯ ಸಸ್ಯಗಳು ಎಂದರ್ಥ.


12. ಬೆಳೆಗಳ ವಿಭಿನ್ನ ವಿಧಗಳನ್ನು ಹೆಸರಿಸಿ.

ಧಾನ್ಯಗಳು, ತರಕಾರಿಗಳು, ಹಣ್ಣುಗಳು.



13. ಭಾರತ ಒಂದು ವಿಶಾಲವಾದ ದೇಶವಾಗಿದ್ದು ಕೆಲವು ಹವಾಮಾನ ಪರಿಸ್ಥಿತಿಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಬದಲಾಗುತ್ತವೆ ಅಂತಹ ಬದಲಾಗುವ ಹವಾಮಾನ ಪರಿಸ್ಥಿತಿಗಳನ್ನು ಹೆಸರಿಸಿ.


ಉಷ್ಣಾಂಶ, ತೇವಾಂಶ, ಮತ್ತು ಮಳೆಯ ಪ್ರಮಾಣ.


14. ಭಾರತ ದೇಶದಲ್ಲಿ ಕಂಡುಬರುವ ಎರಡು ರೀತಿಯ ಬೆಳೆಗಳನ್ನು ಹೆಸರಿಸಿ.


ಭಾರತ ದೇಶದಲ್ಲಿ ಕಂಡು ಬರುವ ಎರಡು ರೀತಿಯ ಬೆಳೆಗಳು ಯಾವುವೆಂದರೆ ಒಂದು ಖಾರಿಫ್ ಬೆಳೆಗಳು. 

ಎರಡನೆಯದು ರಬಿ ಬೆಳೆಗಳು.


15. ಖಾರಿಫ್ ಬೆಳೆಗಳು ಎಂದರೇನು?

ಮಳೆಗಾಲದಲ್ಲಿ ಬಿತ್ತನೆ ಮಾಡುವ ಬೆಳೆಗಳಿಗೆ ಖಾರಿಫ್ ಬೆಳೆಗಳು ಎನ್ನುವರು.


16. ಭಾರತ ದೇಶದಲ್ಲಿ ಮಳೆಗಾಲವು ಸಾಮಾನ್ಯವಾಗಿ ಯಾವ ಅವಧಿಯಲ್ಲಿ ಕಂಡುಬರುತ್ತದೆ?

ಭಾರತ ದೇಶದಲ್ಲಿ ಮಳೆಗಾಲವು ಸಾಮಾನ್ಯವಾಗಿ ಜೂನ್ ನಿಂದ ಸೆಪ್ಟೆಂಬರ್ ವರೆಗೆ ಕಂಡುಬರುತ್ತದೆ.


17. ಖಾರಿಫ್ ಬೆಳೆಗಳಿಗೆ ಉದಾಹರಣೆ ಕೊಡಿ.


ಭತ್ತ, ಜೋಳ, ಸೋಯಾಬೀನ್, ನೆಲಗಡಲೆ, ಹತ್ತಿ ಇತ್ಯಾದಿಗಳು ಖಾರಿಫ್ ಬೆಳೆಗಳು


18 ರಬಿ ಬೆಳೆಗಳು ಎಂದರೇನು?

ಚಳಿಗಾಲದಲ್ಲಿ ಬೆಳೆಯುವ ಬೆಳೆಗಳಿಗೆ ರಬಿ ಬೆಳೆಗಳು ಎನ್ನುವರು.


19 ರಬಿ ಬೆಳೆಗಳ ಕಾಲಾವಧಿಯನ್ನು ತಿಳಿಸಿ.

ರಬಿ ಬೆಳೆಗಳ ಕಾಲಾವಧಿ ಸಾಮಾನ್ಯವಾಗಿ ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಇರುತ್ತದೆ. 

 

20. ರಬಿ ಬೆಳೆಗಳಿಗೆ ಉದಾಹರಣೆ ಕೊಡಿ.

ಗೋಧಿ, ಕಡಲೆ, ಸಾಸಿವೆ, ಬಟಾಣಿ, ಅಗಸೆ ರಬಿ ಬೆಳೆಗಳಿಗೆ ಉದಾಹರಣೆಗಳಾಗಿವೆ.


1 ಬಿತ್ತನೆ ಮಾಡುವ ಮೊದಲು ಮಣ್ಣನ್ನು ಸಣ್ಣ ಕಣಗಳ ಗಾತ್ರಕ್ಕೆ ಏಕೆ ಪುಡಿ ಮಾಡುತ್ತಾರೆ?


ಹೆಚ್ಚಿನ ಇಳುವರಿ ಪಡೆಯಲು.


2 ಬಿತ್ತನೆ ಮಾಡುವ ಮೊದಲು ಮಣ್ಣನ್ನು ಸಣ್ಣ ಕಣಗಳ ಗಾತ್ರಕ್ಕೆ ಪುಡಿ ಮಾಡಲು ಬಳಸುವ ಸಲಕರಣೆಗಳನ್ನು ಹೆಸರಿಸಿ.


ನೇಗಿಲು ಎಡೆಕುಂಟೆ ಮತ್ತು ಕಲ್ಟಿವೇಟರ್


3. ನೇಗಿಲಿನ ಬಗ್ಗೆ ಟಿಪ್ಪಣಿ ಬರೆಯಿರಿ.


ಮಣ್ಣನ್ನು ಉಳುಮೆ ಮಾಡಲು, ಬೆಳಗೆ ಗೊಬ್ಬರಗಳನ್ನು ಹಾಕಲು, ಕಳೆಗಳನ್ನು ತೆಗೆಯಲು, ಮಣ್ಣನ್ನು ಪುಡಿ ಮಾಡಲು ಮುಂತಾದ ಕೆಲಸಗಳಿಗೆ ಅನಾದಿಕಾಲದಿಂದಲೂ ನೇಗಿಲನ್ನು ಬಳಸಲಾಗುತ್ತಿದೆ. ಈ ಸಲಕರಣೆಯನ್ನು ಮರದಿಂದ ಮಾಡಲಾಗಿದ್ದು ಎತ್ತುಗಳಿಂದ ಅಥವಾ ಇತರ ಪ್ರಾಣಿಗಳಿಂದ(ಕುದುರೆಗಳು, ಒಂಟೆಗಳು ಇತ್ಯಾದಿ) ಎಳೆಯಲಾಗುತ್ತದೆ. ಇದು ಬಲಯುತವಾದ ತ್ರಿಕೋನಾಕಾರದ ಕಬ್ಬಿಣದ ಚೂರನ್ನು ಹೊಂದಿದ್ದು ಅದನ್ನು ನೇಗಿಲಿನ ಕುಳ ಎಂದು ಕರೆಯುತ್ತಾರೆ. ಉದ್ದನೆಯ ಮರದ ತುಂಡು ನೇಗಿಲಿನ ಮುಖ್ಯ ಭಾಗವಾಗಿದ್ದು ಅದನ್ನು ಈಚುಎಂದು ಕರೆಯುತ್ತಾರೆ. ಈಚಿನ ಒಂದು ತುದಿಯಲ್ಲಿ ಹಿಡಿಕೆ (ಮೇಳಿ) ಇರುತ್ತದೆ. ಇನ್ನೊಂದು ತುದಿಯನ್ನು ಎತ್ತುಗಳ ಕುತ್ತಿಗೆಯ ಮೇಲೆ ಇಡುವ ನೊಗಕ್ಕೆ ಕಟ್ಟಲಾಗುತ್ತದೆ. ಒಂದು ಜೊತೆ ಎತ್ತುಗಳು ಮತ್ತು ಒಬ್ಬ ಮನುಷ್ಯ ಸುಲಭವಾಗಿ ನೇಗಿಲನ್ನು ಬಳಸಬಹುದು.


4. ಎಡೆಕುಂಟೆಯ ಬಗ್ಗೆ ಟಿಪ್ಪಣಿ ಬರೆಯಿರಿ.


ಎಡೆಕುಂಟೆಯು ಸರಳವಾದ ಉಪಕರಣವಾಗಿದ್ದು ಕಳೆಗಳನ್ನು ತೆಗೆಯಲು ಮತ್ತು ಮಣ್ಣನ್ನು ಸಡಿಲಗೊಳಿಸಲು ಬಳಸುತ್ತಾರೆ. ಇದು ಮರ ಅಥವಾ ಕಬ್ಬಿಣದಿಂದಾದ ಉದ್ದನೆಯ ತುಂಡನ್ನು ಹೊಂದಿರುತ್ತದೆ. ಅಗಲವಾದ, ಬಲಯುತವಾದ ಮತ್ತು ಒಂದು ಕಬ್ಬಿಣದ ತಟ್ಟೆಯಂತಹ ರಚನೆಯನ್ನು ಇದರ ಒಂದು ತುದಿಯಲ್ಲಿ ಅಳವಡಿಸಲಾಗಿರುತ್ತದೆ ಮತ್ತು ಇದು ಬ್ಲೇಡ್ ನಂತೆ ಕೆಲಸ ಮಾಡುತ್ತದೆ. ಇದು ಸಹ ಪ್ರಾಣಿಗಳಿಂದ ಎಳೆಯಲ್ಪಡುತ್ತದೆ.


5. ಕಲ್ಟಿವೇಟರ್ ಬಗ್ಗೆ ಟಿಪ್ಪಣಿ ಬರೆಯಿರಿ.


ಇತ್ತೀಚಿನ ದಿನಗಳಲ್ಲಿ ಟ್ರ್ಯಾಕ್ಟರ್ ನಿಂದ ಎಳೆಯಲ್ಪಡುವ ಕಲ್ಟಿವೇಟರ್ ನಿಂದ ಉಳುಮೆಯನ್ನು ಮಾಡಲಾಗುತ್ತದೆ. ಕಲ್ಟಿವೇಟರ್ ನ ಬಳಕೆಯಿಂದ ದೈಹಿಕ ಶ್ರಮ ಮತ್ತು ಸಮಯದ ಉಳಿತಾಯವಾಗುತ್ತದೆ.


6. ಬಿತ್ತನೆಯ ಬೀಜಗಳು ನೀರಿನ ಮೇಲೆ ತೇಲಿದರೆ, ನೀವು ನೀಡುವ ಕಾರಣವೇನು?


ಹಾನಿಗೊಳಗಾದ ಬಿತ್ತನೆಯ ಬೀಜಗಳು ಟೊಳ್ಳಾಗಿರುತ್ತವೆ. ಆದ್ದರಿಂದ ಅವು ಹಗುರವಾಗಿರುತ್ತವೆ. ಆದ್ದರಿಂದ ಅವು ನೀರಿನ ಮೇಲೆ ತೇಲುತ್ತವೆ. ಉತ್ತಮ ಆರೋಗ್ಯಕರ ಬೀಜಗಳನ್ನು ಹಾನಿಗೊಂಡ ಬೀಜಗಳಿಂದ ಪ್ರತ್ಯೇಕಿಸಲು ಇದು ಉತ್ತಮ ವಿಧಾನವಾಗಿದೆ.


7. ಬಿತ್ತನೆಗೆ ಎಂತಹ ಬೀಜಗಳನ್ನು ಆಯ್ದುಕೊಳ್ಳಲಾಗುತ್ತದೆ?


ಬಿತ್ತನೆಗೆ ಮೊದಲು ಒಳ್ಳೆಯ ತಳಿಯ ಆರೋಗ್ಯಕರ, ಸ್ವಚ್ಛ ಮತ್ತು ಉತ್ತಮ ಗುಣಮಟ್ಟದ ಬೀಜಗಳನ್ನು ಆಯ್ದುಕೊಳ್ಳಲಾಗುತ್ತದೆ.


8. ಕೂರಿಗೆ ಎಂದರೇನು?


ಬಿತ್ತನೆಗೆ ಬಳಸುವ ಸಾಂಪ್ರದಾಯಿಕ ಸಲಕರಣೆಯು ಒಂದು ಆಲಿಕೆಯ ಆಕಾರದಲ್ಲಿರುತ್ತದೆ ಇದನ್ನು ಕೂರಿಗೆ ಎನ್ನುವರು.


9. ಕೂರಿಗೆ ಬಿತ್ತನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.


ಬೀಜಗಳನ್ನು ಕೂರಿಗೆಯ ಆಲಿಕೆಯಂತಹ ಭಾಗದಲ್ಲಿ ತುಂಬಲಾಗುತ್ತದೆ. ಅವು ಚೂಪಾದ ತುದಿಗಳನ್ನು ಹೊಂದಿದ ಎರಡು ಅಥವಾ ಮೂರು ಕೊಳವೆಗಳ ಮೂಲಕ ಕೆಳಗೆ ಬರುತ್ತವೆ. ಈ ತುದಿಗಳು ಮಣ್ಣಿನೊಳಕ್ಕೆ ಚುಚ್ಚಿ ಬೀಜಗಳನ್ನು ಬಿತ್ತುತ್ತವೆ.


10. ಬಿತ್ತನೆಯ ಸಾಂಪ್ರದಾಯಿಕ ವಿಧಾನ ಯಾವುದು?


ಕೂರಿಗೆ ಬಿತ್ತನೆ


11. ಯಾಂತ್ರಿಕ ಕೂರಿಗೆ ಕುರಿತು ಟಿಪ್ಪಣಿ ಬರೆಯಿರಿ.


ಇತ್ತೀಚಿನ ದಿನಗಳಲ್ಲಿ ಟ್ರ್ಯಾಕ್ಟರ್ ನ ಸಹಾಯದಿಂದ ಯಾಂತ್ರಿಕ ಕೂರಿಗೆಯನ್ನು (seed drill) ಬಳಸಿ ಬಿತ್ತನೆ ಮಾಡಲಾಗುತ್ತಿದೆ. ಈ ಸಲಕರಣೆಯು ಸರಿಯಾದ ಆಳದಲ್ಲಿ ಮತ್ತು ಅಂತರಗಳಲ್ಲಿ ಒಂದೇ ರೀತಿಯಾಗಿ ಬೀಜಗಳನ್ನು ಬಿತ್ತನೆ ಮಾಡುತ್ತದೆ. ಬಿತ್ತನೆಯ ನಂತರ ಬೀಜಗಳು ಮಣ್ಣಿನಿಂದ ಮುಚ್ಚಿರುವುದನ್ನು ಇದು ಖಚಿತಪಡಿಸುತ್ತದೆ. ಪಕ್ಷಿಗಳು ಬೀಜಗಳನ್ನು ತಿನ್ನದಂತೆ ಇದು ರಕ್ಷಿಸುತ್ತದೆ.

ಯಾಂತ್ರಿಕ ಕೂರಿಗೆಯಿಂದ ಮಾಡುವ ಬಿತ್ತನೆಯು ಶ್ರಮ ಮತ್ತು ಸಮಯವನ್ನು ಉಳಿಸುತ್ತದೆ. ಸಸ್ಯಗಳು ಒತ್ತೊತ್ತಾಗಿ ದಟ್ಟವಾಗಿ ಬೆಳೆಯುವುದನ್ನು ತಪ್ಪಿಸಲು ಬೀಜಗಳ ನಡುವೆ ಸೂಕ್ತ ಅಂತರವಿರಬೇಕು. ಸಸ್ಯಗಳು ಸಾಕಷ್ಟು ಸೌರಬೆಳಕು, ಪೋಷಕಾಂಶಗಳು ಮತ್ತು ನೀರನ್ನು ಮಣ್ಣಿನಿಂದ ಪಡೆಯಲು ಇದು ಸಹಾಯಕವಾಗಿದೆ. ಕೆಲವು ವೇಳೆ ದಟ್ಟವಾದ ಬೆಳವಣಿಗೆಯನ್ನು ತಪ್ಪಿಸಲು ಕೆಲವು ಸಸ್ಯಗಳನ್ನು ಕಿತ್ತು ಹಾಕಬೇಕಾಗುತ್ತದೆ.


12. ಸಾವಯವ ಗೊಬ್ಬರಗಳು ಮತ್ತು ರಸಗೊಬ್ಬರಗಳು ಎಂದರೇನು?


ಸಸ್ಯಗಳ ಆರೋಗ್ಯಕರ ಬೆಳವಣಿಗೆಗೆ ಪೋಷಕಾಂಶಗಳ ರೂಪದಲ್ಲಿ ಮಣ್ಣಿಗೆ ಸೇರಿಸುವ ಪದಾರ್ಥಗಳನ್ನು ಸಾವಯವ ಗೊಬ್ಬರಗಳು ಮತ್ತು ರಸಗೊಬ್ಬರಗಳು ಎನ್ನುವರು.


13. ಗೊಬ್ಬರ ನೀಡಿಕೆ ಎಂದರೇನು?


ಮಣ್ಣು ಖನಿಜಯುಕ್ತ ಪೋಷಕಾಂಶಗಳನ್ನು ಬೆಳೆಗೆ ಒದಗಿಸುತ್ತದೆ. ನಿರಂತರವಾಗಿ ಬೆಳೆಗಳನ್ನು ಬೆಳೆಯುವುದರಿಂದ ಮಣ್ಣಿನಲ್ಲಿ ಕೆಲವು ಪೋಷಕಾಂಶಗಳ ಕೊರತೆ ಉಂಟಾಗುತ್ತದೆ ಆದ್ದರಿಂದ ಮಣ್ಣಿಗೆ ಪುನಹ ಪೋಷಕಾಂಶಗಳನ್ನು ಸೇರಿಸಲು ರೈತರು ಅವಶ್ಯವಾಗಿ ಜಮೀನಿಗೆ ಗೊಬ್ಬರಗಳನ್ನು ಹಾಕಬೇಕು ಪ್ರಕ್ರಿಯೆಯನ್ನು "ಗೊಬ್ಬರ ನೀಡಿಕೆ" ಎನ್ನುತ್ತಾರೆ. 


14. ಸಸ್ಯಗಳ ದುರ್ಬಲ ಬೆಳವಣಿಗೆಗೆ ಕಾರಣವೇನು?


ಅಸಮರ್ಪಕ ಅಥವಾ ಕಡಿಮೆ ಗೊಬ್ಬರ ನೀಡಿಕೆಯು ಸಸ್ಯಗಳ ದುರ್ಬಲ ಬೆಳವಣಿಗೆಗೆ ಕಾರಣವಾಗುತ್ತದೆ.


15. ಸಾವಯವ ಗೊಬ್ಬರವನ್ನು ಹೇಗೆ ಪಡೆಯುತ್ತಾರೆ? 


ಗೊಬ್ಬರವು ಒಂದು ಸಾವಯವ ಪದಾರ್ಥವಾಗಿದ್ದು ಸಸ್ಯ ಅಥವಾ ಪ್ರಾಣಿ ತ್ಯಾಜ್ಯಗಳ ವಿಘಟನೆಯಿಂದ ಪಡೆಯಲಾಗುತ್ತದೆ. ರೈತರು ಸಸ್ಯ ಮತ್ತು ಪ್ರಾಣಿ ತ್ಯಾಜ್ಯಗಳನ್ನು ಬಯಲು ಪ್ರದೇಶಗಳ ಗುಂಡಿಗಳಲ್ಲಿ ರಾಶಿ ಹಾಕಿ ವಿಘಟನೆ ಹೊಂದಲು ಬಿಡುತ್ತಾರೆ ಕೆಲವು ಸೂಕ್ಷ್ಮಜೀವಿಗಳಿಂದ ವಿಘಟನೆ ಕ್ರಿಯೆ ನಡೆಯುತ್ತದೆ. ವಿಘಟನೆ ಹೊಂದಿದ ಪದಾರ್ಥವನ್ನು ಸಾವಯವ ಗೊಬ್ಬರವಾಗಿ ಬಳಸಲಾಗುತ್ತದೆ.


16. ರಸಗೊಬ್ಬರಗಳು ಎಂದರೇನು?


ರಸಗೊಬ್ಬರಗಳು ರಾಸಾಯನಿಕ ಪದಾರ್ಥಗಳಾಗಿದ್ದು ಒಂದು ನಿರ್ದಿಷ್ಟ ಪೋಷಕಾಂಶವನ್ನು ಹೆಚ್ಚಾಗಿ ಹೊಂದಿರುತ್ತವೆ. ರಸಗೊಬ್ಬರಗಳನ್ನು ಕಾರ್ಖಾನೆಗಳಲ್ಲಿ ಉತ್ಪಾದಿಸಲಾಗುತ್ತದೆ.


17. ರಸಗೊಬ್ಬರಗಳಿಗೆ ಉದಾಹರಣೆ ಕೊಡಿ.


ಯೂರಿಯಾ

ಅಮೋನಿಯಂ ಸಲ್ಫೇಟ್ 

ಸೂಪರ್ ಫಾಸ್ಪೇಟ್ 

ಪೊಟ್ಯಾಷ್ 

ಎನ್.ಪಿ.ಕೆ. (ನೈಟ್ರೋಜನ್, ಫಾಸ್ಪರಸ್, ಪೊಟ್ಯಾಶಿಯಂ).


18. ರಸಗೊಬ್ಬರಗಳಿಂದೇನು ಪ್ರಯೋಜನ?


ರಸಗೊಬ್ಬರಗಳ ಬಳಕೆಯು ಗೋಧಿ, ಭತ್ತ ಮತ್ತು ಜೋಳಗಳಂತಹ ಬೆಳೆಗಳ ಅಧಿಕ ಇಳುವರಿ ಪಡೆಯಲು ರೈತರಿಗೆ ಸಹಾಯಕವಾಗಿದೆ.


19. ರಸಗೊಬ್ಬರಗಳಿಂದಾಗುವ ಕೆಡಕುಗಳನ್ನು ಬರೆಯಿರಿ.


ರಸಗೊಬ್ಬರಗಳ ಅಧಿಕ ಬಳಕೆಯಿಂದಾಗಿ ಮಣ್ಣಿನ ಫಲವತ್ತತೆ ಕಡಿಮೆಯಾಗಿದೆ. ರಸಗೊಬ್ಬರಗಳು ಜಲಮಾಲಿನ್ಯದ ಆಕರಗಳು ಕೂಡಾ ಆಗಿವೆ.


20. ಮಣ್ಣಿನ ಫಲವತ್ತತೆಯನ್ನು ಕಾಪಾಡಲು ಕೈಗೊಳ್ಳಬಹುದಾದ ಕ್ರಮಗಳನ್ನು ತಿಳಿಸಿ.


ರಸಗೊಬ್ಬರಗಳ ಬದಲಾಗಿ ಸಾವಯವ ಗೊಬ್ಬರಗಳನ್ನು ಬಳಸಬೇಕು.

ಎರಡು ಬೆಳೆಗಳ ನಡುವೆ ಸ್ವಲ್ಪಕಾಲ ಜಮೀನನ್ನು ಉಳುಮೆ ಮಾಡದೆ ಬೀಳು ಬಿಡಬೇಕು.









Comments

Popular posts from this blog

ನಮ್ಮ ಪರಿಸರ ಹತ್ತನೇ ತರಗತಿ

How do organisms reproduce